ಲಖನೌ (ಪಿಟಿಐ): ಉತ್ತರ ಪ್ರದೇಶ ಸರ್ಕಾರವು ದಾದ್ರಿ ಕೊಲೆ ಪ್ರಕರಣ ಹಾಗೂ ನಂತರದ ಘಟನಾವಳಿಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಮಂಗಳವಾರ ಕಳುಹಿಸಿಕೊಟ್ಟಿದೆ.
ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಕೆಯಾಗಿರುವ ಬಗ್ಗೆ ಸಚಿವಾಲಯದ ವಕ್ತಾರರೊಬ್ಬರು ಖಚಿತ ಪಡಿಸಿದ್ದಾರೆ.
ಗೋಮಾಂಸ ಸೇವಿಸಿದ್ದಾರೆ ಎಂದು ಅನುಮಾನಪಟ್ಟು ಇಕ್ಲಾಖ್ ಎಂಬುವರನ್ನು ಕೊಂದ ಪ್ರಕರಣ ಹಾಗೂ ನಂತರದ ಘಟನಾವಳಿಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.