ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಸಂಭ್ರಮ ತಂದ ಜಿಎಸ್‌ಟಿ ಪರಿಷ್ಕರಣೆ

ತೆರಿಗೆ ಸುಧಾರಣಾ ಕ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ
Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದ್ವಾರಕಾ: ‘ದೇಶದ ಉದ್ಯಮಿಗಳು ಸರ್ಕಾರದ ಕಠಿಣ ನಿಯಮಗಳಲ್ಲಿ ಸಿಲುಕಿ ಒದ್ದಾಡುವುದು ನಮಗೆ ಬೇಕಿಲ್ಲ. ಶುಕ್ರವಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಷ್ಕರಣೆಯಿಂದಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ನಿಟ್ಟುಸಿರು ಬಿಟ್ಟಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ನೀವೆಲ್ಲರೂ ದೀಪಾವಳಿಗಾಗಿ ಭಾರಿ ಸಿದ್ಧತೆ ನಡೆಸುತ್ತಿರಬೇಕಲ್ಲವೇ. ಗುಜರಾತ್‌ನಲ್ಲಂತೂ ಅದರಲ್ಲೂ ಉದ್ಯಮಿಗಳು ದೀಪಾವಳಿಯನ್ನು ಭಾರಿ ಜೋರಾಗಿ ಆಚರಿಸುತ್ತಾರೆ. ದೀಪಾವಳಿ 15 ದಿನ ಮೊದಲೇ ಬಂದಿದೆಯೆಂಬಂತೆ ದೇಶದಾದ್ಯಂತ ಜನರು ಪರಿಷ್ಕೃತ ಜಿಎಸ್‌ಟಿಯನ್ನು ಸಂಭ್ರಮಿಸುತ್ತಿದ್ದಾರೆ’ ಎಂದಿದ್ದಾರೆ.

‘3 ತಿಂಗಳು ಜಿಎಸ್‌ಟಿಯನ್ನು ಅಧ್ಯಯನ ಮಾಡಿ ನ್ಯೂನತೆಗಳನ್ನು ಸರಿಪಡಿಸುತ್ತೇವೆ. ಅಗತ್ಯ ಬದಲಾವಣೆ ತರುತ್ತೇವೆ ಎಂದು ಮೊದಲೇ ಹೇಳಿದ್ದೆವು. ಅಗತ್ಯವಿದ್ದ ಬದಲಾವಣೆ ತರುವಂತೆ ಹಣಕಾಸು ಸಚಿವರು ಜಿಎಸ್‌ಟಿ ಸಮಿತಿಯಲ್ಲಿನ ಎಲ್ಲರ ಮನವೊಲಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಟೀಕೆ: ‘ದೇಶದಲ್ಲಿ ಅತ್ಯಂತ ಹೆಚ್ಚು ಉದ್ಯೋಗಾವಕಾಶ ಇರುವ ಕೃಷಿ ಮತ್ತು ಜವಳಿ ಕ್ಷೇತ್ರಗಳಿಗೆ ಜಿಎಸ್‌ಟಿಯಿಂದಾಗಿ ಯಾವುದೇ ಲಾಭ ಆಗಿಲ್ಲ. ನೇರ, ಪಾರದರ್ಶಕ ಮತ್ತು ಸರಳ ಜಿಎಸ್‌ಟಿಯನ್ನು ಯುಪಿಎ ಸರ್ಕಾರ ರೂಪಿಸಿತ್ತು. ಆದರೆ ಈ ಸರ್ಕಾರ ಜಿಎಸ್‌ಟಿಯನ್ನು ಗೊಂದಲಮಯ ಮತ್ತು ಸಂಕೀರ್ಣಗೊಳಿಸಿ ದೇಶದ ಆರ್ಥಿಕತೆಯನ್ನು ಕುಸಿತದ ಹಾದಿ ಹಿಡಿದಿದೆ’ ಎಂದು ಅವರು ಟೀಕಿಸಿದ್ದಾರೆ.

‘ಮೋದಿಯನ್ನು ಬೆಂಬಲಿಸಿದ್ದು ದೊಡ್ಡ ತಪ್ಪು’

‘ಆರಂಭದಲ್ಲಿ ಮೋದಿ ಅವರನ್ನು ಬೆಂಬಲಿಸಿದ್ದು ನನ್ನ ದೊಡ್ಡ ತಪ್ಪು’ ಎಂದು ಬಿಜೆಪಿಯ ಹಿರಿಯ ನಾಯಕ ಅರುಣ್ ಶೌರಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಜತೆಗೆ ಪ್ರಧಾನಿ ಮೋದಿ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೋಲಿಸಿ ಲೇವಡಿ ಮಾಡಿದ್ದಾರೆ.

‘ಅಮೆರಿಕದ ಅಧ್ಯಕ್ಷ ಟ್ರಂಪ್ ‘ಮಾಧ್ಯಮಗಳು ನನ್ನನ್ನು ತಪ್ಪಾಗಿ ಬಿಂಬಿಸುತ್ತಿವೆ’ ಎಂದು ಆರೋಪಿಸುತ್ತಿರುತ್ತಾರೆ. ನೋಟು ರದ್ದತಿ ವೇಳೆ ‘ನನಗೆ ಜೀವ ಬೆದರಿಕೆ ಇದೆ. ನನ್ನನ್ನು ಕೊಂದರೂ ದಲಿತರ ಸೇವೆ ಮಾಡುವುದನ್ನು ನಾನು ಬಿಡುವುದಿಲ್ಲ’ ಎಂದು ನಮ್ಮ ಪ್ರಧಾನಿ ಹೇಳುತ್ತಿದ್ದರು. ಈ ಇಬ್ಬರು ನಾಯಕರೂ ತಾವು ಮಾಧ್ಯಮಗಳ ಸಂಚಿನ ಸಂತ್ರಸ್ತರು ಎಂದು ಹೇಳಿಕೊಳ್ಳುತ್ತಾರೆ. ಆ ಮೂಲಕ ಮತ್ತೇನೋ ಲಾಭ ಮಾಡಿಕೊಳ್ಳುತ್ತಾರೆ’ ಎಂದು ಶೌರಿ ಆರೋಪಿಸಿದ್ದಾರೆ.

* ಜನ ಲಕ್ಷ್ಮೀಪೂಜೆ ಮುಗಿಸುವಷ್ಟರಲ್ಲೇ ದೀಪಾವಳಿ ಬರುತ್ತಿದೆ. ಆದರೆ ಸರ್ಕಾರ ತೆರಿಗೆ ಮೇಲೆ ತೆರಿಗೆ ಏರಿ ಲೂಟಿ ಮಾಡಿರುವುದರಿಂದ ಜನರ ಬಳಿ ಈಗ ‘ಲಕ್ಷ್ಮಿ’ಯೇ ಇಲ್ಲ

- ಉದ್ಧವ್ ಠಾಕ್ರೆ, ಶಿವಸೇನಾ ಮುಖ್ಯಸ್ಥ

* ವೃತ್ತಿಪರವಲ್ಲದ, ದೂರದೃಷ್ಟಿಯಿಲ್ಲದ ಮತ್ತು ಸೊಕ್ಕಿನ ನಶೆಯೇರಿದ ಸರ್ಕಾರದಿಂದಾಗಿ ಜಿಎಸ್‌ಟಿ ‘ಗ್ರಾಸ್ಲಿ ಸ್ಕೇರೀ ಟ್ಯಾಕ್ಸ್’  (ಸಂಪೂರ್ಣ ಭಯ ಹುಟ್ಟಿಸುವ ತೆರಿಗೆ) ಆಗಿದೆ

-ರಣದೀಪ್‌ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT