<p>ಪೇಪರು ಓದುತ್ತಿದ್ದ ಬೆಕ್ಕಣ್ಣ ‘ಇಂಡಿಯಾ ಬಣದವ್ರ ಮನ್ಯಾಗೆ ಒಬ್ಬಟ್ಟು ಮಾಡ್ತಾರಂತೆ. ಊಟಕ್ಕೆ ಹೋಗೂಣು, ಅಡುಗೆ ಮಾಡಬ್ಯಾಡ’ ಎಂದಿತು.</p><p>‘ಇನ್ನಾ ರಿಸಲ್ಟೇ ಬಂದಿಲ್ಲ, ಈಗ್ಲೇ ಸಿಹಿಯೂಟ ಹಾಕ್ತಾರಂತ?’ ಅಚ್ಚರಿಯಿಂದ ನಾನು ಬೆಕ್ಕಣ್ಣ ಹಿಡಿದಿದ್ದ ಪೇಪರಿನಲ್ಲಿ ಇಣುಕಿದೆ.</p><p>‘ಮಂಗ್ಯಾನಂಥವ್ನೇ... ಅವರು ನಾವು ಒಗ್ಗಟ್ಟಾಗಿರ್ತೀವಿ ಅಂದರೆ ನೀ ಒಬ್ಬಟ್ಟು ಅಂತೀಯಲ್ಲ’ ಎಂದು ಬೈಯ್ದೆ.</p><p>‘ಇವ್ರು ಖರೇಖರೇ ಒಗ್ಗಟ್ಟಾಗಿರ್ತಾರೆ ಅಂದ್ರೆ ಒಬ್ಬಟ್ಟು ತಿಂದಷ್ಟೇ ಖುಷಿ ಬಿಡು’ ಎಂದು ಮೂತಿ ತಿರುವಿದ ಬೆಕ್ಕಣ್ಣ, ‘ಅದ್ಸರಿ, ಯಾರಿಗೆ ಎಷ್ಟು ಬರಬೌದು’ ಎಂದು ಮುಗುಮ್ಮಾಗಿ ಕೇಳಿತು.</p><p>‘ಒಬ್ಬೊಬ್ಬರು ಚುನಾವಣಾ ಪಂಡಿತರು ಒಂದೊಂಥರಾ ಭವಿಷ್ಯ ಹೇಳ್ಯಾರೆ. ಮತದಾರ ಪ್ರಭುವಿನ ಚಿತ್ತವನು ಬಲ್ಲವರಾರು?’ ಎಂದೆ.</p><p>‘ಕಮಲಕ್ಕನ ಮನಿಯವ್ರಿಗೆ 303 ಗ್ಯಾರಂಟಿ ಅಂತ ದೊಡ್ಡ ಪಂಡಿತ್ರು ಪ್ರಶಾಂತ್ ಕಿಶೋರ್ ಹೇಳ್ಯಾರೆ. ನಮ್ ಮೋದಿ ಮಾಮ 75 ದಿನಗಳಲ್ಲಿ ನೂರಾರು ರ್ಯಾಲಿ, ಪ್ರಚಾರ ಅಭಿಯಾನ ಮತ್ತು ಸಂದರ್ಶನ ನೀಡಿ ದಾಖಲೆ ಬರೆದಿದ್ದು ಫಲ ನೀಡತೈತೆ’ ಬೆಕ್ಕಣ್ಣ ಮೀಸೆ ತಿರುವಿತು.</p><p>‘ಈ ಎಲ್ಲಾ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಅತ್ತಾಗೆ ಸರಿಸಿ. ನಮಗೆ ಇನ್ನೂರ ತೊಂಬತ್ತು ಸಿಗತಾವು. ನಮ್ಮದು ಮತಗಟ್ಟೆ ವಾಸ್ತವ ಸಮೀಕ್ಷೆ’ ಅಂತ ಖರ್ಗೆ ಅಜ್ಜಾರು ಹೇಳ್ಯಾರೆ’.</p><p>‘ಎಲ್ಲಾ ಎಕ್ಸಿಟ್ ಪೋಲ್ಗಳೂ ಕಮಲಕ್ಕನ ಮನಿಯವ್ರಿಗೆ ಹೆಚ್ಚೂಕಡಿಮೆ ಮುನ್ನೂರೈವತ್ತು ಅಂದಾವೆ. ಪಾಪ... ಇಂಡಿಯಾ ಬಣದವರಿಗೆ ಒಬ್ಬಟ್ಟು ಮಾಡಿ, ತಿನ್ನೋ ಪ್ರಸಂಗನೇ ಬರಂಗಿಲ್ಲೇನೋ’ ಎಂದಿತು ಬೆಕ್ಕಣ್ಣ.</p><p>‘ಒಬ್ಬಟ್ಟು ಹೋಗಲಿ... ರಿಸಲ್ಟು ಬರತಿದ್ದ ಹಂಗೆ ಒಗ್ಗಟ್ಟೂ ಇಲ್ಲ ಅನ್ನೂ ಪರಿಸ್ಥಿತಿ ಬರಬಾರದು ನೋಡು’.</p><p>‘ಒಗ್ಗಟ್ಟು ಅನ್ನದೇ ಒಂದು ಒಗಟು. ಒಗ್ಗಟ್ಟಿನಿಂದಿದ್ದರೆ ಮುಂದೆ ಒಬ್ಬಟ್ಟು ಮಾಡಿ ತಿನ್ನಬಹುದು’ ಎಂಬ ಹೊಸ ಗಾದೆಯೊಂದನ್ನು ಹೊಸೆದ ಬೆಕ್ಕಣ್ಣ ‘ಏನಾದರೇನು... ಶ್ರೀಸಾಮಾನ್ಯರು ಹಬ್ಬಗಳಿಗೆ ಒಬ್ಬಟ್ಟು ಮಾಡುವುದಕ್ಕೂ ಹಿಂದೆ ಮುಂದೆ ನೋಡೋ ಪರಿಸ್ಥಿತಿ ತಪ್ಪಂಗಿಲ್ಲ’ ಎಂದು ಹುಳ್ಳಗೆ ನಕ್ಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪೇಪರು ಓದುತ್ತಿದ್ದ ಬೆಕ್ಕಣ್ಣ ‘ಇಂಡಿಯಾ ಬಣದವ್ರ ಮನ್ಯಾಗೆ ಒಬ್ಬಟ್ಟು ಮಾಡ್ತಾರಂತೆ. ಊಟಕ್ಕೆ ಹೋಗೂಣು, ಅಡುಗೆ ಮಾಡಬ್ಯಾಡ’ ಎಂದಿತು.</p><p>‘ಇನ್ನಾ ರಿಸಲ್ಟೇ ಬಂದಿಲ್ಲ, ಈಗ್ಲೇ ಸಿಹಿಯೂಟ ಹಾಕ್ತಾರಂತ?’ ಅಚ್ಚರಿಯಿಂದ ನಾನು ಬೆಕ್ಕಣ್ಣ ಹಿಡಿದಿದ್ದ ಪೇಪರಿನಲ್ಲಿ ಇಣುಕಿದೆ.</p><p>‘ಮಂಗ್ಯಾನಂಥವ್ನೇ... ಅವರು ನಾವು ಒಗ್ಗಟ್ಟಾಗಿರ್ತೀವಿ ಅಂದರೆ ನೀ ಒಬ್ಬಟ್ಟು ಅಂತೀಯಲ್ಲ’ ಎಂದು ಬೈಯ್ದೆ.</p><p>‘ಇವ್ರು ಖರೇಖರೇ ಒಗ್ಗಟ್ಟಾಗಿರ್ತಾರೆ ಅಂದ್ರೆ ಒಬ್ಬಟ್ಟು ತಿಂದಷ್ಟೇ ಖುಷಿ ಬಿಡು’ ಎಂದು ಮೂತಿ ತಿರುವಿದ ಬೆಕ್ಕಣ್ಣ, ‘ಅದ್ಸರಿ, ಯಾರಿಗೆ ಎಷ್ಟು ಬರಬೌದು’ ಎಂದು ಮುಗುಮ್ಮಾಗಿ ಕೇಳಿತು.</p><p>‘ಒಬ್ಬೊಬ್ಬರು ಚುನಾವಣಾ ಪಂಡಿತರು ಒಂದೊಂಥರಾ ಭವಿಷ್ಯ ಹೇಳ್ಯಾರೆ. ಮತದಾರ ಪ್ರಭುವಿನ ಚಿತ್ತವನು ಬಲ್ಲವರಾರು?’ ಎಂದೆ.</p><p>‘ಕಮಲಕ್ಕನ ಮನಿಯವ್ರಿಗೆ 303 ಗ್ಯಾರಂಟಿ ಅಂತ ದೊಡ್ಡ ಪಂಡಿತ್ರು ಪ್ರಶಾಂತ್ ಕಿಶೋರ್ ಹೇಳ್ಯಾರೆ. ನಮ್ ಮೋದಿ ಮಾಮ 75 ದಿನಗಳಲ್ಲಿ ನೂರಾರು ರ್ಯಾಲಿ, ಪ್ರಚಾರ ಅಭಿಯಾನ ಮತ್ತು ಸಂದರ್ಶನ ನೀಡಿ ದಾಖಲೆ ಬರೆದಿದ್ದು ಫಲ ನೀಡತೈತೆ’ ಬೆಕ್ಕಣ್ಣ ಮೀಸೆ ತಿರುವಿತು.</p><p>‘ಈ ಎಲ್ಲಾ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಅತ್ತಾಗೆ ಸರಿಸಿ. ನಮಗೆ ಇನ್ನೂರ ತೊಂಬತ್ತು ಸಿಗತಾವು. ನಮ್ಮದು ಮತಗಟ್ಟೆ ವಾಸ್ತವ ಸಮೀಕ್ಷೆ’ ಅಂತ ಖರ್ಗೆ ಅಜ್ಜಾರು ಹೇಳ್ಯಾರೆ’.</p><p>‘ಎಲ್ಲಾ ಎಕ್ಸಿಟ್ ಪೋಲ್ಗಳೂ ಕಮಲಕ್ಕನ ಮನಿಯವ್ರಿಗೆ ಹೆಚ್ಚೂಕಡಿಮೆ ಮುನ್ನೂರೈವತ್ತು ಅಂದಾವೆ. ಪಾಪ... ಇಂಡಿಯಾ ಬಣದವರಿಗೆ ಒಬ್ಬಟ್ಟು ಮಾಡಿ, ತಿನ್ನೋ ಪ್ರಸಂಗನೇ ಬರಂಗಿಲ್ಲೇನೋ’ ಎಂದಿತು ಬೆಕ್ಕಣ್ಣ.</p><p>‘ಒಬ್ಬಟ್ಟು ಹೋಗಲಿ... ರಿಸಲ್ಟು ಬರತಿದ್ದ ಹಂಗೆ ಒಗ್ಗಟ್ಟೂ ಇಲ್ಲ ಅನ್ನೂ ಪರಿಸ್ಥಿತಿ ಬರಬಾರದು ನೋಡು’.</p><p>‘ಒಗ್ಗಟ್ಟು ಅನ್ನದೇ ಒಂದು ಒಗಟು. ಒಗ್ಗಟ್ಟಿನಿಂದಿದ್ದರೆ ಮುಂದೆ ಒಬ್ಬಟ್ಟು ಮಾಡಿ ತಿನ್ನಬಹುದು’ ಎಂಬ ಹೊಸ ಗಾದೆಯೊಂದನ್ನು ಹೊಸೆದ ಬೆಕ್ಕಣ್ಣ ‘ಏನಾದರೇನು... ಶ್ರೀಸಾಮಾನ್ಯರು ಹಬ್ಬಗಳಿಗೆ ಒಬ್ಬಟ್ಟು ಮಾಡುವುದಕ್ಕೂ ಹಿಂದೆ ಮುಂದೆ ನೋಡೋ ಪರಿಸ್ಥಿತಿ ತಪ್ಪಂಗಿಲ್ಲ’ ಎಂದು ಹುಳ್ಳಗೆ ನಕ್ಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>