ನವದೆಹಲಿ (ಐಎಎನ್ಎಸ್): ಭ್ರಷ್ಟಾಚಾರವನ್ನು ವಿರೋಧಿಸುವ ನೆಪದಲ್ಲಿ ಜನರನ್ನು ಚಳವಳಿಗೆ ಪ್ರಚೋದಿಸಿದ ಬಾಬಾ ರಾಮ್ದೇವ್ ಒಬ್ಬ ವಂಚಕ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ.
ನಿರಶನ ಆರಂಭಿಸುವ ಮೊದಲೇ ಬಾಬಾ ಮತ್ತು ಸರ್ಕಾರದ ಮಧ್ಯೆ ಒಡಂಬಡಿಕೆ ಉಂಟಾಗಿತ್ತು. ಆದರೆ ಬಾಬಾ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಮೋಸ ಮಾಡಿದರು. ಅವರಿಗೆ ಬಹಳ ಮಹತ್ವ ನೀಡುತ್ತಿರುವ ಮಾಧ್ಯಮಗಳು ಇದನ್ನು ಅರಿತುಕೊಳ್ಳಬೇಕು ಎಂದಿದ್ದಾರೆ.