ನವದೆಹಲಿ (ಪಿಟಿಐ): ಬಿಜೆಪಿ 15 ಸದಸ್ಯರ ಕೇಂದ್ರ ಚುನಾವಣೆ ಸಮಿತಿಯನ್ನು ಪಕ್ಷದ ಅಧ್ಯಕ್ಷ ಅಮಿತ್ ಷಾ ಮಂಗಳವಾರ ಪುನರ್ರಚನೆ
ಮಾಡಿದ್ದಾರೆ.
ಕಾರ್ಯದರ್ಶಿ ಸ್ಥಾನಕ್ಕೆ ಅನಂತಕುಮಾರ್ ಬದಲಿಗೆ ಜೆ.ಪಿ. ನಡ್ಡಾ ಅವರನ್ನು ನೇಮಿಸಲಾಗಿದೆ. ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರಂತಹ ಹಿರಿಯರ ಬದಲಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ನಡ್ಡಾ ಅವರಂತಹ ಯುವ ಮುಖಂಡರನ್ನು ನೇಮಿಸಲಾಗಿದೆ.