2004–06ನೇ ಸಾಲಿನಲ್ಲಿ ದಯಾನಿಧಿ ಅವರು ಸಚಿವರಾಗಿದ್ದ ವೇಳೆ ಅವರಿಗೆ ಒದಗಿಸಲಾಗಿದ್ದ 764 ದೂರವಾಣಿ ಸಂಪರ್ಕಗಳಿಗೆ ಶುಲ್ಕ ಪಾವತಿಸಿರಲಿಲ್ಲ. ಇದರಿಂದ ಬಿಎಸ್
ಎನ್ಎಲ್ ಮತ್ತು ಎಂಟಿಎನ್ಎಲ್ಗೆ ₹1.78 ಕೋಟಿ ನಷ್ಟವಾಗಿತ್ತು. ಜೊತೆಗೆ, ಕಲಾನಿಧಿ ಒಡೆತನದ ಸನ್ ಟಿ.ವಿಯ ಕಾರ್ಯಕ್ರಮಗಳ ವೇಗವಾದ ಸಂವಹನಕ್ಕಾಗಿ ಅಕ್ರಮವಾಗಿ ದೂರವಾಣಿ ತಂತಿಗಳನ್ನು ಬಳಸಿಕೊಳ್ಳಲಾಗಿದ್ದು, ಮಾರನ್ ಅವರ ಮನೆ ಟೆಲಿಫೋನ್ ಎಕ್ಸ್ಚೇಂಜ್ ಆಗಿ ಪರಿವರ್ತನೆ ಹೊಂದಿದೆ’ ಎಂದು ಸಿಬಿಐ ಆರೋಪಿಸಿತ್ತು.