ಡೆಹ್ರಾಡೂನ್ (ಪಿಟಿಐ): ಕೇದಾರನಾಥ ದೇಗುಲದ ಬಾಗಿಲುಗಳು ಮೇ 4ರಂದು ತೆರೆಯಲಿದ್ದು, ದಿನಕ್ಕೆ 1,000 ಭಕ್ತರನ್ನು ಮಾತ್ರ ಒಳಗೆ ಬಿಡಲಾಗುತ್ತದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ತಿಳಿಸಿದ್ದಾರೆ.
ಇದಕ್ಕೂ ಮುನ್ನವೇ ಮೇ 2ರಂದು ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳ ಬಾಗಿಲುಗಳು ಭಕ್ತರಿಗಾಗಿ ತೆರೆಯಲಿದ್ದು, ಮೇ 5ರಂದು ಬದರಿನಾಥ ದೇವಸ್ಥಾನ ತೆರೆಯುವುದು ಎಂದು ಅವರು ಹೇಳಿದ್ದಾರೆ.
ಯಾತ್ರಾರ್ಥಿಗಳ ಸುರಕ್ಷತೆಯ ಬಗ್ಗೆ ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಭೂಕುಸಿತದ ಪ್ರದೇಶಗಳಲ್ಲಿ ಅಗತ್ಯ ತುರ್ತು ಕ್ರಮವಾಗಿ ಪ್ರಯಾಣಿಕರನ್ನು ವಾಯುಯಾನಸೇವೆಯ ಮೂಲಕ ಸ್ಥಳಾಂತರಿಸಲಾಗುವುದು. ಇಕ್ಕಟ್ಟಿಗೆ ಸಿಲುಕುವ ಜನರನ್ನು ತೆರವುಗೊಳಿಸಲು ಎಸ್ಡಿಆರ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.