ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್, ‘ಕಳೆದ ವಾರ ಶಬರಿಮಲೆ ಸಂಭವಿಸಿದ ಕಾಲ್ತುಳಿತದಿಂದ 102 ಮಂದಿ ಅಸುನೀಗಿದ್ದಾರೆ. ಮುಂದೆ ಇಂತಹ ದುರಂತಗಳಾಗದಂತೆ ಎಚ್ಚರ ವಹಿಸಲು ಮತ್ತು ಅಗತ್ಯವಾದ ಮಾರ್ಗೋಪಾಯ ಕಂಡುಹಿಡಿಯಲು ಈ ಗಿರಿಶ್ರೇಣಿಯ ಮೂರು ಆಯಾಮದ ಚಿತ್ರ (3 ಡಿ)ಗಳನ್ನು ಒದಗಿಸುವ ಪ್ರಸ್ತಾವವನ್ನು ಕೇರಳ ಸರ್ಕಾರದ ಮುಂದಿಡಲಾಗಿದೆ’ ಎಂದಿದ್ದಾರೆ.