ಕೈಥಾಲ್ (ಹರಿಯಾಣ): ದಲಿತ ಗರ್ಭಿಣಿಯೊಬ್ಬರನ್ನು ಅಪಹರಿಸಿದ ಇಬ್ಬರು ಯುವಕರು ಅತ್ಯಾಚಾರ ಎಸಗಿರುವ ಅಮಾನುಷ ಘಟನೆಯೊಂದು ಕೈಥಾಲ್ ಜಿಲ್ಲೆಯ ಕಲ್ಯಾತ್ನಲ್ಲಿ ವರದಿಯಾಗಿದೆ.
ಇದು ಹರಿಯಾಣದಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆದಿರುವ 15ನೇ ಅತ್ಯಾಚಾರ ಪ್ರಕರಣ.
ಆರೋಪಿಗಳಾದ ರಾಕೇಶ್ ಮತ್ತು ಪವನ್ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರಕ್ಕೆ ಗುರಿಯಾದ 19 ವರ್ಷದ ಗರ್ಭಿಣಿಯು ಕೈಥಾಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕುಲ್ದೀಪ್ ಸಿಂಗ್ ಯಾದವ್ ಅವರ ಮುಂದೆ ಮಂಗಳವಾರ ಹೇಳಿಕೆ ನೀಡಿದ್ದಾರೆ. `ಯುವತಿಯು ಐದು ತಿಂಗಳ ಗರ್ಭಿಣಿಯಾಗಿದ್ದು, ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.