ಅ.15ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸುವುದು ನಿಶ್ಚಿತ. ಇದನ್ನು ಅರಿತ ಹೂಡಾ ಅವರು ತರಾತುರಿಯಲ್ಲಿ ಈ ಭೂವ್ಯವಹಾರಗಳನ್ನು ಇತ್ಯರ್ಥ ಪಡಿಸಿದ್ದಾರೆ ಎಂದು ಅವರು ಸೋಮವಾರ ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.
ಚುನಾವಣೆ ಪೂರ್ವದಲ್ಲೇ ಭೂ ವ್ಯವಹಾರ ಇತ್ಯರ್ಥ ಪಡಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಹೂಡಾ ಮೇಲೆ ಒತ್ತಡ ಹೇರಿರಬೇಕು ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಒಂದು ವೇಳೆ ಈ ವ್ಯವಹಾರದಲ್ಲಿ ಚನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಯೋಗವನ್ನು ಆಗ್ರಹಿಸಿದರು.
ಜೈಲಿನಿಂದಲೇ ಕೆಲವರು ಹರಿಯಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕನಸು ಕಾಣುತ್ತಿದ್ದಾರೆ ಎಂದು ಅವರು, ಪರೋಕ್ಷವಾಗಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಐಎನ್ಎಲ್ಡಿ ನಾಯಕ ಓಂ ಪ್ರಕಾಶ್ ಚೌಟಾಲಾ ಅವರನ್ನು ಟೀಕಿಸಿದರು.
ಕುಟುಂಬ ರಾಜಕೀಯದಿಂದಾಗಿ ಹರಿಯಾಣ ನಾಶವಾಗಿದೆ. ಸರ್ಕಾರದಲ್ಲಿರುವವರು ‘ಕೌನ್ ಬನೇಗ ಅರಬ್ಪತಿ’ ಎಂಬ ಆಟ ಆಡುತ್ತಿದ್ದಾರೆ ಎಂದು ಅವರು ಹೂಡಾ ಸರ್ಕಾರವನ್ನು ಕುಟುಕಿದರು.