ಇದೇ ಪ್ರದೇಶದಲ್ಲಿ ಶುಕ್ರವಾರ ಹಸುವಿನ ಮೇಲೆ ದಾಳಿ ಮಾಡಿ ಅರ್ಧ ಭಾಗ ತಿಂದು ಹಾಕಿತ್ತು. ಗ್ರಾಮದ ಆಸುಪಾಸಿನಲ್ಲಿ ಜಾನುವಾರು ಮೇಲೆ ಆಗಾಗ ದಾಳಿ ನಡೆಸುತ್ತಿದ್ದ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಇದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಈ ಪ್ರದೇಶದಲ್ಲಿ ಬೋನು ಇಟ್ಟು, ಹಸುವಿನ ಉಳಿದ ಅರ್ಧ ಭಾಗದ ಮಾಂಸ ಹಾಕಿದ್ದರು. ಇದನ್ನು ತಿನ್ನಲು ಬಂದು ಬೋನಿಗೆ ಬಿದ್ದಿದೆ. ಬಂಡೀಪುರ ಅಥವಾ ನಾಗರಹೊಳೆ ಉದ್ಯಾನಕ್ಕೆ ಬಿಡಲಾಗುವುದು ಎಂದು ಆರ್ಫ್ಒ ಜಯಶೇಖರ್ ತಿಳಿಸಿದ್ದಾರೆ.