‘ಬೆಟ್ಟದಲ್ಲಿ ಮಳೆಗಾಲದಲ್ಲಿ ದನಕರು ಮೇಯಿಸಲು ಹುಲ್ಲು ಚೆನ್ನಾಗಿ ಬೆಳೆಯಲಿ ಎನ್ನುವ ಉದ್ದೇಶಕ್ಕೆ ರೈತರು ಆಗಾಗ ಅರಣ್ಯಕ್ಕೆ ಬೆಂಕಿ ಹಾಕುತ್ತಿರುತ್ತಾರೆ. ಆ ರೀತಿ ಇಲ್ಲಿ ಬೆಂಕಿ ಹಾಕಿರುವ ಸಾಧ್ಯತೆ ಇದೆ. ಬೆಂಕಿಯಿಂದ ಗಿಡಮರಗಳಿಗೆ ಹಾನಿ ಆಗಿಲ್ಲ. ಪಕ್ಷಿಗಳ ಗೂಡುಗಳು ಸುಟ್ಟಿರುವುದು ಹೊರತುಪಡಿಸಿದಂತೆ ಪ್ರಾಣಿ, ಪಕ್ಷಿಗಳು ಬೆಂಕಿಗೆ ಆಹುತಿ ಆಗಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ವಿಕ್ರಂ ರೆಡ್ಡಿ ತಿಳಿಸಿದರು.