ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮಿತ್ ಶಾ ಅವರು ಕರಾವಳಿಗೆ ಭೇಟಿ ನೀಡಿದರೆ ಕೋಮು ಗಲಭೆ ಆಗುತ್ತದೆ ಎಂದು ಕಾಂಗ್ರೆಸ್ ನಾಯಕರು ಒಂದು ತಿಂಗಳಿನಿಂದ ಹೇಳುತ್ತಲೇ ಬಂದಿದ್ದರು. ಹಲ್ಲೆ ಮಾಡಿದವರನ್ನೇ ಬೆಂಬಲಿಸಿ ಸ್ಥಳೀಯ ಶಾಸಕರು ಮಾತನಾಡಿದ್ದಾರೆ. ಅವರ ಮಾತುಗಳನ್ನು ಗಮನಿಸಿದ ಬಳಿಕ ಇದು ಕಾಂಗ್ರೆಸ್ ಪ್ರೇರಿತ, ಪೂರ್ವಯೋಜಿತ ಹಲ್ಲೆ ಎಂಬುದು ಅರಿವಿಗೆ ಬಂದಿದೆ’ ಎಂದರು.