‘ತೆರಿಗೆ ಸೋರಿಕೆ ಆಗುತ್ತಿರುವ ಮೂಲಗಳನ್ನು ಪತ್ತೆ ಮಾಡಿ ಅದರ ತಡೆಗೆ ಕ್ರಮ ತೆಗೆದುಕೊಳ್ಳಲಾಯಿತು. ಅಬಕಾರಿಯಲ್ಲಿ ‘ನಂ2’ ದಂಧೆ ಇನ್ನೂ ನಡೆಯುತ್ತಿದ್ದು, ನಿರ್ದಿಷ್ಟವಾಗಿ ಎಲ್ಲೆಲ್ಲಿ ನಡೆಯುತ್ತಿದೆ ಎಂಬುದನ್ನು ನಾನೇ ಅಧಿಕಾರಿಗಳ ಗಮನಕ್ಕೆ ತಂದೆ. ಇದರಿಂದ ಸುಮಾರು ₹2,000 ಕೋಟಿ ಅಧಿಕ ವರಮಾನ ಸಂಗ್ರಹ ಮಾಡಲಾಯಿತು. ಮುದ್ರಾಂಕ ಶುಲ್ಕದಲ್ಲಿ ಶೇ 10 ರಷ್ಟು ರಿಯಾಯ್ತಿ ನೀಡಿದ್ದರಿಂದ ಹೆಚ್ಚುವರಿಯಾಗಿ ₹100 ಕೋಟಿ ಸಂಗ್ರಹವಾಯಿತು. ಕಬ್ಬಿಣ ಅದಿರು ಮಾರಾಟ ಮಾಡಿದ್ದರಿಂದ ₹500 ಕೋಟಿ ಸಿಕ್ಕಿತು. ಅಲ್ಲದೆ, ತೆರಿಗೆಯೇತರ ಆದಾಯ ₹4,000 ಕೋಟಿ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೂ ಕೂಡ ನಿರೀಕ್ಷೆ ಮೀರಿ ಅಂದರೆ ₹6,000 ಕೋಟಿ ಸಂಗ್ರಹವಾಗಿದೆ. ಬಜೆಟ್ ಗಾತ್ರ ಕಡಿಮೆ ಮಾಡಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದರು. ಅದಕ್ಕೆ ನಾನು ಒಪ್ಪಿಗೆ ನೀಡಿರಲಿಲ್ಲ’ ಎಂದರು.