‘ಲಾರಿ, ಕಾರಿಗೆ ಡಿಕ್ಕಿ ಹೊಡೆದಿದ್ದು ಹೇಗೆ ಎಂಬುದು ಗೊತ್ತಾಗಲಿಲ್ಲ. ಕೆಳಗೆ ಇಳಿದು ನೋಡಿದಾಗ ಸೇತುವೆ ಮೇಲೆ ಲಾರಿ ಪಲ್ಟಿಯಾಗಿ ಬಿದ್ದಿತ್ತು. ಮೊದಲು ಅದರ ಚಾಲಕನಿಗೆ ಏನಾಗಿದೆ ನೋಡಿ ಎಂದು ಜನರಿಗೆ ಹೇಳಿದೆ. ಆದರೆ, ಆತ ಅಲ್ಲಿ ಕಾಣಲಿಲ್ಲ. ತಡೆಗೋಡೆ ಇದ್ದ ಕಾರಣ ಲಾರಿ ಕೆಳಗೆ ಬೀಳಲಿಲ್ಲ’ ಎಂದು ಸ್ವಾಮೀಜಿ ತಿಳಿಸಿದ್ದಾರೆ.