ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮಠಗಳಿಗೆ ಕೊಡುಗೆ ನೀಡಿದರು. ಅವರ ಈ ಸೇವೆ ಈಗ ರಾಜಕೀಯವಾಗಿ ಕೈ ಹಿಡಿಯಲಿದೆ. ಅವರಿಗೆ ಒಳ್ಳೆಯ ದಿನಗಳು ಬರಲಿವೆ. ಅವರು ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಮಠಾಧೀಶರೆಲ್ಲಾ ಅನುಷ್ಠಾನ ಕೈಗೊಳ್ಳುತ್ತೇವೆ. ಅವರಿಗೆ ಆಗಸ್ಟ್ 2ರ ನಂತರ ಒಳ್ಳೆಯ ಕಾಲ ಕೂಡಿ ಬರಲಿದೆ’ ಎಂದು ಭವಿಷ್ಯ ನುಡಿದರು.