ಸಮ್ಮೇಳನಾಧ್ಯಕ್ಷೆ, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಡಾ.ಸಮತಾ ದೇಶಮಾನೆ, ‘ದಲಿತರ ಮೇಲಾಗುವ ದೌರ್ಜನ್ಯ, ಬಹಿಷ್ಕಾರ, ಕೊಲೆ, ಸಾಮೂಹಿಕ ಅತ್ಯಾಚಾರ, ಮಹಿಳೆಯರನ್ನು ಬೆತ್ತಲುಗೊಳಿಸುತ್ತಿರುವ ಘಟನೆಗಳು ತೀರಾ ನೋವಿನ ಸಂಗತಿಗಳು. ಡಾ. ಬಾಬಾಸಾಹೇಬರು ಕಂಡ ಕನಸಿನ ಭಾರತದಲ್ಲಿದ್ದೇವೆಯೇ ಎಂಬ ಅನುಮಾನ ಮೂಡುತ್ತದೆ’ ಎಂದು ಹೇಳಿದರು.