ಸಂಸದ ಡಿ.ಕೆ.ಸುರೇಶ್ ಅವರು ಜಿಲ್ಲಾಧಿಕಾರಿ ಕಚೇರಿಯ ಬಳಿ ಬಂದಿದ್ದರು. ಆದರೆ, ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಒಳಗೆ ಹೋಗಲಿಲ್ಲ. ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ದೇವನಹಳ್ಳಿಯ ಮಾಜಿ ಶಾಸಕರಾದ ಮುನಿನರಸಿಂಹಯ್ಯ, ಕೆ.ವೆಂಕಟಸ್ವಾಮಿ ಅವರು ಅಭ್ಯರ್ಥಿಯೊಂದಿಗೆ ಒಳಗೆ ಹೋಗಲು ಪ್ರಯತ್ನಿಸಿದರು.ಇಬ್ಬರಿಗೆ ಮಾತ್ರ ಅವಕಾಶವಿದ್ದ ಕಾರಣ ಅವರು ಹೊರಗಡೆ ನಿಲ್ಲಬೇಕಾಯಿತು.