ಉಪನ್ಯಾಸದಲ್ಲಿ ಉಲ್ಲೇಖಿಸಿದ ಪ್ರಮುಖ ವಿಷಯಗಳು: ಯೋಜನೆಗೆ ಸುಪ್ರೀಂ ಕೋರ್ಟ್ನಿಂದ ತಡೆ ಇಲ್ಲ. ತಮಿಳುನಾಡಿನ ವಾದದಲ್ಲಿ ಯಾವ ಅರ್ಥವೂ ಇಲ್ಲ. ಇಲ್ಲಿ ಕರ್ನಾಟಕ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಹುದು. ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲು ರಾಷ್ಟ್ರೀಯ ಜಲ ಆಯೋಗವೂ ಅನುಮತಿ ನೀಡಿದೆ. ವನ್ಯಜೀವಿ, ಅರಣ್ಯ, ಪರಿಸರ ಇಲಾಖೆಯ ಅನುಮತಿಯೂ ಇದಕ್ಕೆ ಅಗತ್ಯ. ಯೋಜನೆಯ ಅಗತ್ಯವನ್ನು ಪುಷ್ಟೀಕರಿಸುವ ವರದಿಯನ್ನು ಜಲ ಆಯೋಗದ ಮುಂದೆ ಮಂಡಿಸಬೇಕು.