ವ್ಯವಹಾರ ಪ್ರತಿನಿಧಿಗಳನ್ನು ನೇಮಿಸುವ ಮೂಲಕ ಪಿಗ್ಮಿ ಮತ್ತು ಸಾಲದ ಮೊತ್ತ ಸಂಗ್ರಹಿಸಲು ಬ್ಯಾಂಕ್ ವ್ಯವಸ್ಥೆ ಮಾಡಿಕೊಳ್ಳಬಹುದು. ಪ್ರತಿ ತ್ರೈಮಾಸಿಕ ಹೊರಬಾಕಿ ಆಧರಿಸಿ, ಬಡ್ಡಿ ಸಹಾಯಧನವನ್ನು ಕ್ಲೇಮ್ ಮಾಡಿದರೆ, ಆ ಮೊತ್ತವನ್ನು ಬ್ಯಾಂಕುಗಳಿಗೆ ಸರ್ಕಾರ ಭರಿಸಲಿದೆ.
*
ಮೈಮೇಲೆ ಕೆ.ಜಿ.ಗಟ್ಟಲೇ ಬಂಗಾರ ಹೇರಿಕೊಂಡು ಲೇವಾದೇವಿ ಮಾಡುತ್ತ ಬಡವರ ಬೆವರಿನ ಆದಾಯ ಹೀರುವ ಗೂಂಡಾ-ಪುಡಾರಿಗಳ ಅಕ್ರಮಕ್ಕೆ ಈ ಯೋಜನೆಯಿಂದ ಕಡಿವಾಣ ಬೀಳಲಿದೆ.
- ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ