ಮಂಗಳೂರು: ಉಳ್ಳಾಲದ ತೊಕ್ಕೊಟ್ಟು ಒಳಪೇಟೆಯ ಮೂನ್ ಲೈಟ್ ಬಾರ್ ನಲ್ಲಿ ಬುಧವಾರ ತಡರಾತ್ರಿ ಬಿಜೆಪಿ ಕಾರ್ಯಕರ್ತರ ಗುಂಪೊಂದು ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಮೇಲೆ ಹಲ್ಲೆ ನಡೆಸಿದೆ.
ಕೃಷ್ಣ ನಗರ ನಿವಾಸಿ ಜಾಜ್೯ (51), ಮೋಹನದಾಸ್ (42) ಹಲ್ಲೆಗೊಳಗಾದವರು. ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದರೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರಾದ ಕವಿತ್, ಅರುಣ್ ಮತ್ತು ಸುನಿ ಹಲ್ಲೆ ನಡೆಸಿದ್ದಾರೆ.
ಮೋಹನದಾಸ್ ಮತ್ತು ಜಾರ್ಜ್ ಪ್ರಚಾರದಲ್ಲಿ ಭಾಗಿಯಾಗಿದ್ದ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಿತ್ರಾ ಚಂದ್ರಕಾಂತ್ ಗೆಲುವು ಸಾಧಿಸಿದ್ದರು. ಅದೇ ವಾರ್ಡ್ ವ್ಯಾಪ್ತಿಯಲ್ಲಿರುವ ಬಾರ್ನಲ್ಲಿ ಹಲ್ಲೆ ನಡೆದಿದೆ.
ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.