ಬುಧವಾರ ರಾತ್ರಿ ದೆಹಲಿಗೆ ಹೊರಟಿದ್ದ ಸಿದ್ದರಾಮಯ್ಯ ಜೊತೆ ಸತೀಶ ಜಾರಕಿಹೊಳಿ ಕೂಡಾ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ತೆರಳಿದ್ದರು. ಬಳಿಕ ವಿಮಾನ ನಿಲ್ದಾಣದಿಂದ ಅವರು ವಾಪಸಾಗಿದ್ದರು. ಈ ಬಗ್ಗೆ ಸುದ್ದಿಗಾರರು ಕೇಳಿದಾಗ, ‘ಇಲಾಖೆಗೆ ಸಂಬಂಧಿಸಿದ್ದು ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಬೇಕಿತ್ತು. ಹೀಗಾಗಿ ಅವರ ಜೊತೆ ವಿಮಾನ ನಿಲ್ದಾಣದವರೆಗೆ ಹೋಗಿದ್ದೆ’ ಎಂದಿದ್ದಾರೆ.