ಬೆಂಗಳೂರು: ‘ದೇವಾಲಯದಲ್ಲಿ ಸಿದ್ಧಪಡಿಸುವ ಪ್ರಸಾದಕ್ಕೆ ಎಷ್ಟು ಅಕ್ಕಿ, ಸಕ್ಕರೆ, ಉಪ್ಪು-ಖಾರ ಬಳಸಲಾಗುತ್ತದೆ? ನಿತ್ಯ ಎಷ್ಟು ಪೂಜೆ, ಅರ್ಚನೆ ನಡೆಸಲಾಗುತ್ತದೆ? ಅದರಿಂದ ಸಂಗ್ರವಾಗುವ ಹಣವೆಷ್ಟು? ಈ ಹಣವನ್ನೆಲ್ಲಾ ಯಾವುದಕ್ಕೆ ಖರ್ಚು ಮಾಡುತ್ತೀರಿ...? ಎಂಬೆಲ್ಲಾ ಪ್ರಶ್ನೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುವ ಮೂಲಕ ಕೆಲವರು ನಮಗೆ ಕಿರುಕುಳ ನೀಡಿ ಪ್ರಾಣ ಬೆದರಿಕೆ ಒಡ್ಡುತ್ತಿದ್ದು, ಕಾನೂನು ರಕ್ಷಣೆ ನೀಡಬೇಕು’ ಎಂದು ಕೋರಿ ಅರ್ಚಕರ ಸಂಘ ಹೈಕೋರ್ಟ್ ಮೆಟ್ಟಿಲೇರಿದೆ.