ಗೋಕಾಕ:ನಗರದ ಅಂಬೇಡ್ಕರ್ ಬಡಾವಣೆ ನಿವಾಸಿ, ಸಿಆರ್ಪಿಎಫ್ ಯೋಧ ಉಮೇಶ ಮಹಾನಿಂಗಪ್ಪ ಹೆಳವರ (25) ಶನಿವಾರ ಸಂಜೆ ಮಣಿಪುರ ರಾಜ್ಯದ ಇಂಫಾಲ್ ನಗರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾಗಿದ್ದಾರೆ.
ಬಾಂಬ್ ಸ್ಫೋಟಕ್ಕೆ ಸಿಲುಕಿ ಅವರ ಬಲ ಮುಂಗೈ ಸಂಪೂರ್ಣ ಛಿದ್ರಗೊಂಡಿದೆ. ಪಾರ್ಥೀವ ಶರೀರ ಸೋಮವಾರಬೆಳಿಗ್ಗೆವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ನಗರಕ್ಕೆ ತರಲಾಗುವುದು ಎಂದುತಹಶೀಲ್ದಾರ್ ಜಿ.ಎಸ್. ಮಾಳಗಿ ತಿಳಿಸಿದ್ದಾರೆ.