ಸುಳ್ಯ ತಾಲ್ಲೂಕಿನ ಮೋಹನ್ ಚಾಂತಳ, ಯತೀಶ್ ಮೊಗ್ರ, ಯತಿನ್ ಅಂಬೆಕಲ್ಲು ಮತ್ತು ಕುಮುದಾಕ್ಷ ಜಾಲುಮನೆ ನಿರೀಕ್ಷಣಾ ಜಾಮೀನು ಕೋರಿದವರು. ಗೌರಿ ಹತ್ಯೆ ಪ್ರಕರಣದಲ್ಲಿ ಸಂಪಾಜೆಯ ಮೋಹನ್ ನಾಯ್ಕ್ ಬಂಧನದ ಬಳಿಕ ಎಸ್ಐಟಿ ಜುಲೈ 27ರಂದು ಈ ನಾಲ್ವರಿಗೆ ನೋಟಿಸ್ ಜಾರಿಮಾಡಿತ್ತು. ಇದರಿಂದ ಬಂಧನ ಭೀತಿಯಲ್ಲಿರುವ ನಾಲ್ವರು ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ವಕೀಲ ಎಸ್.ಪಿ. ಚೆಂಗಪ್ಪ ಶಂಕಿತ ಆರೋಪಿಗಳ ಪರ ವಾದಿಸುತ್ತಿದ್ದಾರೆ.