‘ಉನ್ನತ ಶಿಕ್ಷಣ ಸಚಿವರು ನೀಡಿದ ನಾಲ್ಕೂ ಭರವಸೆಗಳು ಅತಿಥಿ ಉಪನ್ಯಾಸಕರ ಮೂಗಿಗೆ ತುಪ್ಪ ಸವರಿದಂತಿವೆ. ಸೇವಾ ಭದ್ರತೆ ಇಲ್ಲದ ಭರವಸೆಗಳಿಂದ ಯಾವ ಪ್ರಯೋಜನವೂ ಇಲ್ಲ. 60 ವರ್ಷಕ್ಕೆ ₹5 ಲಕ್ಷ ಧನಸಹಾಯದ ಭರವಸೆ ಇದೆ. ಆದರೆ, ಸಹಾಯಕ ಪ್ರಾಧ್ಯಾಪಕರ ನೇಮಕ, ವರ್ಗಾವಣೆಯಿಂದ ಕಾರ್ಯಭಾರ ಕಡಿಮೆಯಾಗುವುದು, ಪ್ರತಿವರ್ಷ ನಡೆಸುವ ಕೌನ್ಸೆಲಿಂಗ್ನಿಂದ ಬಹಳಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಸಹಾಯಧನ ನೀಡುವ ಮೊದಲು 60 ವರ್ಷದವರೆಗೆ ಸೇವಾಭದ್ರತೆಯ ಭರವಸೆ ನೀಡಬೇಕು’ ಎಂದು ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಕಲ್ಮನಿ ಒತ್ತಾಯಿಸಿದ್ದಾರೆ.