ಮೇಲೆ ಕಾಣಿಸಿದ ಎಲ್ಲ ಕಾರಣಗಳು ಮತ್ತು ಇತ್ತೀಚೆಗೆ ಬೀಳುತ್ತಿರುವ ಮುಂಗಾರು ಮಳೆಯಿಂದ ರೈತರು ಉತ್ಸುಕರಾಗಿ ಬಿತ್ತನೆ ಮಾಡಲು ಸಿದ್ದರಾಗಿದ್ದಾರೆ. ಆದರೆ ಗೊಬ್ಬರ ದಾಸ್ತಾನು ಇಲ್ಲವಾಗಿದೆ. ಹಾವೇರಿ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರ ಸುಮಾರು 35,000 ಟನ್ ಮುಂಗಾರು ಹಂಗಾಮಿಗೆ ಬೇಕಾಗುತ್ತದೆ. ಇಲ್ಲಿಯವರೆಗೂ ಸುಮಾರು 6,500 ಟನ್ ಮಾತ್ರ ಸರಬರಾಜು ಆಗಿದೆ. ಬಾಕಿಯಿರುವ 29,000 ಟನ್ ಗೊಬ್ಬರವನ್ನು ಹಾವೇರಿ ಜಿಲ್ಲೆಗೆ ಪೂರೈಸಬೇಕಿ. ಹಾಗೆಯೇ, ಯೂರಿಯಾ 65,000 ಟನ್ ಮತ್ತು ಕಾಂಪ್ಲೆಕ್ಸ್ 38,000 ಟನ್ನಷ್ಟು ಅಗತ್ಯವಿದ್ದು, ಅದನ್ನೂ ಕೂಡಲೇ ಸರಬರಾಜು ಮಾಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.