ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ಅವರ ವಾದ ಮನ್ನಿಸಿದ ನ್ಯಾಯಪೀಠ, "ಮೂವರೂ ವಿದ್ಯಾರ್ಥಿಗಳಿಗೆ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅನುಮತಿ ನೀಡಬೇಕು" ಎಂದು ಕೆಇಎಗೆ ನಿರ್ದೇಶಿಸಿದೆ. ಅಂತೆಯೇ, "ಈ ಆದೇಶವು ಅರ್ಜಿಯ ಅಂತಿಮ ವಿಚಾರಣೆ ನಂತರ ಹೊರಬರುವ ತೀರ್ಪಿಗೆ ಒಳಪಟ್ಟಿರುತ್ತದೆ" ಎಂದು ಹೇಳಿದೆ.