ಇದರ ವೀಕ್ಷಣೆಗಾಗಿ ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯವು ಟೆಲಿಸ್ಕೋಪ್ ಮತ್ತು ಬೈನಾಕ್ಯುಲರ್ಗಳ ವ್ಯವಸ್ಥೆ ಮಾಡಿಕೊಂಡಿತ್ತು. ಆದರೆ, ಮುಂಜಾನೆ ಮೋಡ ಮತ್ತು ಮಳೆಯಿಂದಾಗಿ ಬಾಹ್ಯಾಕಾಶ ವೀಕ್ಷಣೆ ಸಾಧ್ಯವಾಗಲಿಲ್ಲ. ಇದರಿಂದ ಖಗೋಳ ವೀಕ್ಷಕರಿಗೆ ನಿರಾಸೆ ಉಂಟಾಯಿತು. ಮಳೆ ಹೆಚ್ಚಾಗಿದ್ದ ಕಾರಣ, ಕೆಲವೇ ಆಸಕ್ತರು ತಾರಾಲಯಕ್ಕೆ ಬಂದಿದ್ದರು.