‘ಪುರಸಭೆ ಎದುರು ಪೊರಕೆಯನ್ನು ಕನ್ನಡ ಬಾವುಟದಲ್ಲಿ ಸುತ್ತಿಡಲಾಗಿತ್ತು. ಇದರಿಂದ ಕನ್ನಡ ಧ್ವಜಕ್ಕೆ ಅಪಮಾನವಾಗಿದೆ. ಪುರಸಭೆ ಅಧ್ಯಕ್ಷೆ ಡಿ.ಆರ್.ಭಾರತಿ, ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್ ಕ್ಷಮೆಯಾಚಿಸಬೇಕು. ಹೀಗೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬೋಜೇಗೌಡ ಒತ್ತಾಯಿಸಿದ್ದಾರೆ.