‘ಮಂಡಳಿಯ ಇಂತಹ ಕ್ರಮಗಳು ನಕಲು ತಡೆಯುವ ಜತೆಗೆ, ವಿಚಕ್ಷಣ ದಳ ಕೊಠಡಿ ಪ್ರವೇಶಿಸಿದಾಗ ವಿದ್ಯಾರ್ಥಿಗಳು ಅತ್ತ ಗಮನಹರಿಸುವುದನ್ನು ತಡೆಯಬಹುದಾಗಿದೆ. ವಿಚಕ್ಷಣ ದಳ ಪರೀಕ್ಷಾ ಕೊಠಡಿ ಪ್ರವೇಶಿಸಿದಾಗ ಬಹಳಷ್ಟು ವಿದ್ಯಾರ್ಥಿಗಳು ವಿಚಲಿತರಾಗುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳು ಗೋಡೆಗೆ ಮುಖ ಮಾಡಿ ಕುಳಿತರೆ ಬೇರೆಯವರು ಬಂದು ಹೋಗುವುದು ಗಮನಕ್ಕೆ ಬರುವುದಿಲ್ಲ. ಹಾಗಾಗಿ, ಇಂತಹ ಸೂಚನೆ ನೀಡಲಾಗಿದೆ’ ಎಂದು ಮಂಡಳಿ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಸಮರ್ಥನೆ ನೀಡಿದರು.