ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಹಮತ್ ಉಲ್ಲಾ ಕೊತ್ವಾಲ್, ‘ಕೆಪಿಎಸ್ಸಿ ಕಾರ್ಯವ್ಯಾಪ್ತಿ ಆಯ್ಕೆ ನಡೆಸಿ ಸರ್ಕಾರಕ್ಕೆ ಪಟ್ಟಿ ಕಳುಹಿಸಿಕೊಡುವುದಷ್ಟೇ. ಅಂತಹ ಪಟ್ಟಿಯನ್ನು ರೀ–ಡೂ ಮಾಡುವ ಅಧಿಕಾರ ವ್ಯಾಪ್ತಿ ಕೆಪಿಎಸ್ಸಿಗೆ ಇಲ್ಲ. ಈಗಾಗಲೇ 13 ವರ್ಷ ಕೆಲಸ ಮಾಡಿರುವ ಅರ್ಜಿದಾರರನ್ನು ಅಮಾನತು ಮಾಡಿರುವುದು ಕಾನೂನು ಬಾಹಿರ’ ಎಂದು ವಾದ ಮಂಡಿಸಿದರು.