ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘ ನಾಡಿನ ಇಬ್ಬರು ಹಿರಿಯರಿಗೆ ನೀಡುವ ‘ಜೀವಮಾನ ಸಾಧನೆ ಪ್ರಶಸ್ತಿ’ಗೆ ಸಾಹಿತಿಡಾ. ಬಿ.ಎ. ವಿವೇಕ ರೈ ಹಾಗೂ ಪರಿಸರವಾದಿನಾಗೇಶ ಹೆಗಡೆ ಭಾಜನರಾಗಿದ್ದಾರೆ.
ಸಂಶೋಧನಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗೆ ಡಾ. ವಿವೇಕ ರೈಗೆ2019ನೆ ಸಾಲಿನ ಡಾ. ಶಂ.ಬಾ. ಜೋಷಿ ಸಂಶೋಧನಾ ಪ್ರಶಸ್ತಿ ಮತ್ತು ವಿಜ್ಞಾನ ಸಾಹಿತ್ಯಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗೆ ನಾಗೇಶ ಹೆಗಡೆ ಅವರಿಗೆ ಡಾ. ಶಿವರಾಮ ಕಾರಂತ ವಿಜ್ಞಾನ ಸಾಹಿತ್ಯ ಪ್ರಶಸ್ತಿನೀಡಲಾಗುತ್ತಿದೆ.
ಈ ಪ್ರಶಸ್ತಿಯು ₹25 ಸಾವಿರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ಏಪ್ರಿಲ್ 13ರಂದು ಕರ್ನಾಟಕ ಸಂಘ ಭವನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.