28 ಲೋಕಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಹೊರಗಿನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಂತಹ ರಾಜಕೀಯ ನೆಲೆಯ ವಲಸೆ ಪರ್ವದಲ್ಲಿ ಕಾಂಗ್ರೆಸ್ನ ಏಳು, ಬಿಜೆಪಿಯ ನಾಲ್ಕು ಹಾಗೂ ಜೆಡಿಎಸ್ನ ಒಬ್ಬರು ಇದ್ದಾರೆ. ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರ ತೊರೆದು ಬೆಂಗಳೂರು ಉತ್ತರ ಕ್ಷೇತ್ರದತ್ತ ವಲಸೆ ಬಂದಿದ್ದಾರೆ. ಬಿಜೆಪಿಯ ಗೋವಿಂದ ಕಾರಜೋಳ, ವಿ. ಸೋಮಣ್ಣ, ಜಗದೀಶ ಶೆಟ್ಟರ, ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ಬೇರೆ ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿದ್ದಾರೆ. ಕಾಂಗ್ರೆಸ್ನ ಐವರು ತಮ್ಮ ಸ್ವಂತ ಕ್ಷೇತ್ರಗಳಿಂದ ವಲಸೆ ಬಂದು ಹೊಸ ಕ್ಷೇತ್ರಗಳಲ್ಲಿ ಇದೇ ಮೊದಲ ಚುನಾವಣಾ ಎದುರಿಸುತ್ತಿದ್ದಾರೆ.