ಬೆಂಗಳೂರು: ‘ಒಳ್ಳೆಯವರಿಗೆ ಒಳ್ಳೆಯದು ಮಾಡುವ ಮತ್ತು ಕೆಟ್ಟವರನ್ನು ಶಿಕ್ಷಿಸುವವನೇ ಶನಿ ದೇವ. ಮೋದಿಯವರು ಕಾಂಗ್ರೆಸ್ಗೆ ಶನಿಯಾಗಿ ಕಾಡಲಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದರು.
ಮೋದಿ ಈ ದೇಶಕ್ಕೆ ಅಂಟಿದ ಶನಿ ಎಂದು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಮೇಶ್ಕುಮಾರ್ ಎಷ್ಟು ಸತ್ಯವಂತರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೋದಿಯವರು ರಮೇಶ್ ಕುಮಾರ್ ಮತ್ತು ಕಾಂಗ್ರೆಸ್ಗೆ ಶನಿಯಾಗಿದ್ದಾರೆ’ ಎಂದರು.
‘ಯಾರು ಭ್ರಷ್ಟಾಚಾರ ಮಾಡುತ್ತಾರೆ. ಯಾರು ದೇಶ ವಿರೋಧಿ ಮತ್ತು ಜನ ವಿರೋಧಿ ಕೆಲಸ ಮಾಡುತ್ತಾರೋ ಅವರಿಗೆ ಮೋದಿಯವರು ಶನಿಯಾಗಿ ಕಾಡುತ್ತಾರೆ. ಶಿಕ್ಷೆ ಕೊಡುತ್ತಾರೆ. ರಮೇಶ್ಕುಮಾರ್ ಅವರಿಗೆ ಇದರ ಒಳ ಮರ್ಮಗೊತ್ತಿದೆ’ ಎಂದು ತಿರುಗೇಟು ನೀಡಿದರು.