ಈ ಬಗ್ಗೆ ಕಾಂಗ್ರೆಸ್ನ ಅನಿಲ್ ಚಿಕ್ಕಮಾದು ಪ್ರಶ್ನೆ ಕೇಳಿದರು. ನಾಡ ಕಚೇರಿ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನದ ಬಗ್ಗೆ ಸಚಿವ ಅಶೋಕ ಉತ್ತರ ನೀಡಿದರು. ಜೆಡಿಎಸ್ನ ವೆಂಕಟರಾವ್ ನಾಡಗೌಡ, ‘ನಾಡ ಕಚೇರಿಗಳಲ್ಲಿ ಎರಡು ಕುರ್ಚಿಗಳನ್ನು ಹಾಕಲು ಜಾಗ ಇರುವುದಿಲ್ಲ’ ಎಂದು ಹೇಳಿದರು. ಕುಮಾರ ಬಂಗಾರಪ್ಪ ಅವರು ಸಹ ಧ್ವನಿಗೂಡಿಸಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಬೆಂಗಳೂರಿನಲ್ಲಿ ಕುಳಿತು ಅವುಗಳ ವಿನ್ಯಾಸ ಮಾಡಲಾಗುತ್ತದೆ. ಆಯಾ ಪ್ರದೇಶಕ್ಕೆ ತಕ್ಕಂತೆ ವಿನ್ಯಾಸ ಮಾಡುತ್ತಿಲ್ಲ. ಇದರಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ನಾಡ ಕಚೇರಿಗಳಿಗೆ ಹೊಸ ಸ್ವರೂಪ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.