ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಅವರು ಆದಾಯ ತೆರಿಗೆ ಇಲಾಖೆಗೆ ₹ 316. 63 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ಈ ಸಂಬಂಧ ಮೂರು ಪ್ರಕರಣಗಳು ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿಯಲ್ಲಿದೆ (ಐಟಿಎಟಿ) ಎಂದು ನಾಮಪತ್ರದ ಜೊತೆಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅವರು ಘೋಷಿಸಿಕೊಂಡಿದ್ದಾರೆ.
ಆ ಪೈಕಿ, ಆದಾಯ ತೆರಿಗೆ ಪಾವತಿ ಮೊತ್ತ 2013–14ನೇ ಸಾಲಿನ ₹ 73.08 ಲಕ್ಷ, 2014–15ರ ಸಾಲಿನ ₹ 144.39 ಕೋಟಿ, 2016–17ನೇ ಸಾಲಿನ ₹ 171.51 ಕೋಟಿ ಐಟಿಎಟಿಯಲ್ಲಿ ಬಾಕಿ ಇದೆ ಎಂದು ಅವರು ತಿಳಿಸಿದ್ದಾರೆ.
ಗೋವಿಂದರಾಜ್ ಅವರು ₹ 3.90 ಕೋಟಿ ಮೊತ್ತದ ಮತ್ತು ತಮ್ಮ ಪತ್ನಿ ಹೆಸರಿನಲ್ಲಿ ₹ 6.54 ಕೋಟಿಯ ಚರಾಸ್ತಿ ಘೋಷಿಸಿಕೊಂಡಿದ್ದಾರೆ. ತಮ್ಮ ಹೆಸರಿನಲ್ಲಿ ₹ 18.58 ಲಕ್ಷ ಮೌಲ್ಯದ ಮತ್ತು ಪತ್ನಿ ಹೆಸರಿನಲ್ಲಿ ₹ 27.01 ಕೋಟಿ ಮೌಲ್ಯದ ಸ್ತಿರಾಸ್ತಿ ಘೋಷಿಸಿದ್ದಾರೆ.
ವಿಧಾನ ಪರಿಷತ್ಗೆ ನಾಮಪತ್ರ ಸಲ್ಲಿಸಿರುವ ಮುಖ್ಯಮಂತ್ರಿ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ₹ 9.23 ಕೋಟಿ ಮೌಲ್ಯ ಚರಾಸ್ತಿ, ₹ 22.65 ಕೋಟಿ ಮೌಲ್ಯದ ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ.
ಯತೀಂದ್ರ ಅವರಿಗೆ ₹ 10.39 ಕೋಟಿ ಸಾಲವಿದೆ. ಅವರು ಜಿಎಸ್ಟಿ ಮತ್ತು ಆಸ್ತಿ ತೆರಿಗೆ ಸೇರಿ ಸರ್ಕಾರಕ್ಕೆ ಒಟ್ಟು ₹ 7.76 ಲಕ್ಷ ಪಾವತಿಸಲು ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೆ, ಕೈಯಲ್ಲಿ ₹ 63 ಸಾವಿರ ನಗದು, ಬಿಎಂಡಬ್ಲ್ಯು ಕಾರು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.