ಬೆಂಗಳೂರು: ‘ಪಕ್ಷದ ಚೌಕಟ್ಟಿನಲ್ಲಿ ಎಲ್ಲರೂ ನಡೆದುಕೊಳ್ಳಬೇಕು. ಪಕ್ಷದಿಂದ ನಾವು, ನಮ್ಮಿಂದ ಪಕ್ಷ ಅಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
‘ನಾವೇನು ಹೈಕಮಾಂಡ್ ಗುಲಾಮರಾ?’ ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಟಿಕೆಟ್ ಸಿಗುವಾಗ ಹೈಕಮಾಂಡ್ ಮುಖ್ಯ. ಟಿಕೆಟ್ ಸಿಕ್ಕ ಮೇಲೆ ಹೈಕಮಾಂಡ್ ಇಲ್ಲ ಅಂದರೆ ಹೇಗೆ? ಯಾರೂ ಯಾರ ಗುಲಾಮರೂ ಅಲ್ಲ’ ಎಂದರು.
‘ಆರು ತಿಂಗಳ ಒಳಗೆ ನಿಗಮ ಮಂಡಳಿಗಳಿಗೆ ನೇಮಕ ಮಾಡುವುದಾಗಿ ಹೇಳಿದ್ದೆವು. ಹೇಳಿದಂತೆ ಮಾಡಿದ್ದೇವೆ. ಆದಷ್ಟು ಬೇಗ ಕಾರ್ಯಕರ್ತರಿಗೂ ಅಧಿಕಾರ ನೀಡುತ್ತೇವೆ’ ಎಂದೂ ಹೇಳಿದರು.