‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಎಚ್.ಡಿ.ರೇವಣ್ಣ, ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ರಾಜ್ಯದ ಅಧಿಕಾರ ಕೇಂದ್ರೀಕೃತವಾಗಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳು ಕೇವಲ ಹಾಸನ, ರಾಮನಗರ, ತುಮಕೂರು, ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಥೇಟ್ ಖಾಸಗಿ ಕಂಪೆನಿಯಂತೆ ಸರ್ಕಾರ ವರ್ತಿಸಲು ಸಂಪುಟದಲ್ಲಿನ ಅಯೋಗ್ಯ ಸಚಿವರೇ ಕಾರಣರಾಗಿದ್ದಾರೆ' ಎಂದು ಪುನರುಚ್ಚರಿಸಿದರು.