‘ರೈತ ಸಂಘದಲ್ಲಿ ಸಿದ್ಧಾಂತಗಳು ಒಂದೇ ಆಗಿದ್ದರೂ ವಿಚಾರಗಳು ವಿಭಿನ್ನವಾಗಿವೆ. ಸ್ವಾರ್ಥಕ್ಕೆ ಬೆಲೆ ಕೊಡುವವರು ಇನ್ನೂ 10 ಸಂಘ
ಕಟ್ಟಲಿ. ಹಲವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಾಕಷ್ಟು ಸಮಸ್ಯೆ ಅನುಭವಿಸಿದ್ದೇವೆ. ಈಗ ಮತ್ತದೇ ತಪ್ಪು ಮಾಡುವುದಿಲ್ಲ. ಸಂಘಟನೆ ಗಟ್ಟಿಗೊಳ್ಳಬೇಕು, ಹೀಗಾಗಿ ಹೊಸ ರೈತರು ಹಾಗೂ ಪ್ರಗತಿಪರ ಚಿಂತಕರನ್ನು ಸೇರಿಸಿಕೊಳ್ಳಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.