ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, 2023ರ ಮಾರ್ಚ್ ಅಂತ್ಯದವರೆಗೆ ಅಸಲು ₹169 ಕೋಟಿ, ಬಡ್ಡಿ ₹438 ಕೋಟಿ ಇದೆ. ಬಾಕಿದಾರರು ಮತ್ತು ಅವರ ವಾರಸುದಾರರ ಚರ ಮತ್ತು ಸ್ಥಿರ ಆಸ್ತಿಗಳನ್ನು ಪತ್ತೆ ಹಚ್ಚಿ ಭೂ ಕಂದಾಯ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲಾಗುವುದು. ‘ಕರಸಮಾಧಾನ ಯೋಜನೆ’ ಮೂಲಕ ಈಗಾಗಲೇ ₹107 ಕೋಟಿ ವಸೂಲಿ ಮಾಡಲಾಗಿದೆ. ಮಾರ್ಚ್ 31ರ ಒಳಗೆ ಬಾಕಿ ಪಾವತಿಸಿದರೆ ಬಡ್ಡಿ ಮನ್ನಾ ಮಾಡಲಾಗುವುದು ಎಂದಿದ್ದಾರೆ.