ಬೆಂಗಳೂರು: ‘ಹೀಗೊಂದು ದಿನ’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಸಂಭಾವನೆಯಾಗಿ ನಿರ್ಮಾಪಕ ಚಂದ್ರಶೇಖರ್ ನೀಡಿದ್ದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿ ನಟಿ ಸಿಂಧೂ ಲೋಕನಾಥ್, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ನಿರ್ಮಾಪಕರ ವಿರುದ್ಧ ಕ್ರಮ ಜರುಗಿಸುವಂತೆ ಸಿಂಧೂ ನ್ಯಾಯಾಲಯಕ್ಕೆ ಕೋರಿದ್ದಾರೆ.
‘ಹೀಗೊಂದು ದಿನ’ ಸಿನಿಮಾ ಮಾರ್ಚ್ನಲ್ಲೇ ಬಿಡುಗಡೆ ಆಗಿದೆ. ಸಂಭಾವನೆಯಾಗಿ ₹2 ಲಕ್ಷಕ್ಕೆ ಚೆಕ್ ಕೊಟ್ಟಿದ್ದರು’ ಎಂದು ಸಿಂಧೂ ‘ಪ್ರಜಾವಾಣಿ’ಗೆ ತಿಳಿಸಿದರು.
‘ಚೆಕ್ ಬೌನ್ಸ್ ಬಳಿಕ ನಿರ್ಮಾಪಕರನ್ನು ಸಂಪರ್ಕಿಸಲು ಯತ್ನಿಸಿದ್ದೆ. ಅವರು ಕರೆ ಸ್ವೀಕರಿಸಿರಲಿಲ್ಲ’ ಎಂದರು.
ಮೊಕದ್ದಮೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಿರ್ಮಾಪಕ ಚಂದ್ರಶೇಖರ್ ಲಭ್ಯರಾಗಲಿಲ್ಲ.