ಬಳ್ಳಾರಿ: ಸಚಿವರಾದ ಬಳಿಕ ನಗರಕ್ಕೆ ಮೊದಲ ಬಾರಿಗೆ ಬುಧವಾರ ಭೇಟಿ ನೀಡಿದ ಈ.ತುಕಾರಾಂ ಅವರು ಕನಕದುರ್ಗಮ್ಮ ಗುಡಿಯಲ್ಲಿ ಪೂಜೆ ಸಲ್ಲಿಸಿ ಕಾರು ಹತ್ತಿ ಕುಳಿತ ಬಳಿಕ ಕಾರ್ಯಕರ್ತರೊಬ್ಬರು ಅವರ ಶೂಗಳನ್ನು ತಂದು ಕೊಡುವ ವೀಡಿಯೋ ವೈರಲ್ ಆಗಿತ್ತು.
ಮಧ್ಯಾಹ್ನ 1.30ರ ವೇಳೆಗೆ ಸಚಿವರು ಗುಡಿಗೆ ಭೇಟಿ ನೀಡಿದ ಬಳಿಕ, ಗುಡಿಯ ಬಾಗಿಲಲ್ಲೇ ನಿಂತಿದ್ದ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತರು. ನಂತರ, ಕಾರಿನ ಡಿಕ್ಕಿಯಲ್ಲಿದ್ದ ಅವರ ಶೂಗಳನ್ನು ಕಾರ್ಯಕರ್ತರೊಬ್ಬರು ತಂದು ಅವರ ಪಾದದ ಬಳಿ ಇಟ್ಟರು. ಶೂಗಳನ್ನು ತಂದವರು ಸಚಿವರ ಸಂಬಂಧಿಕರು ಎಂದು ತಿಳಿದುಬಂದಿದೆ.