‘ಮನೆಯಿಂದ ಹೊರಬಿದ್ದು ಮೂರು ತಿಂಗಳಾಯಿತು. ಮನೆಯವರಿಗೆ ಧಾರವಾಡದಲ್ಲಿರುವ ಮಾಹಿತಿ ಇಲ್ಲ. ಬೆಂಗಳೂರಿನಲ್ಲೇ ಇದ್ದು, ಕಳೆದು ಹೋಗಿದ್ದೇನೆ ಎಂದು ಭಾವಿಸಿದ್ದಾರೆ. ಯಶವಂತಪುರದ ಮತ್ತೀಕೆರೆ ರಸ್ತೆಯಲ್ಲಿ ನಮ್ಮ ಮನೆ ಇದ್ದು ಅಲ್ಲಿಗೆ ನನ್ನನ್ನು ಕಳುಹಿಸಿಕೊಡಿ. ಎಲ್ಲರೂ ಸುಮ್ಮನೆ ಬಂದು ನನ್ನ ಮಾಹಿತಿ ಕೇಳಿ ಹೋಗಬೇಡಿ. ನನ್ನನ್ನು ಮನೆಗೆ ತಲುಪಿಸಿ. ಇಲ್ಲವೇ ಒಂದು ಸಣ್ಣ ಕೆಲಸವಾದರೂ ಕೊಡಿಸಿ’ ಎನ್ನುತ್ತಾರೆ ವಿನ್ಸೆಂಟ್.