ಜ್ವರದಿಂದ ಬಳಲುತ್ತಿರುವವರು ಉತ್ತಮ ಚಿಕಿತ್ಸೆಗಾಗಿ ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು, ಉಡುಪಿಗೂ ತೆರಳಿದ್ದಾರೆ. ಈ ಕುರಿತು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ನಾಗೇಂದ್ರ ಕುಮಾರ್ ಅವರನ್ನು ಪ್ರಶ್ನಿಸಿದರೆ, ‘ಎರಡು ವಾರಗಳ ಹಿಂದೆ ಗ್ರಾಮದಲ್ಲಿ ವೈರಾಣು ಜ್ವರ ಕಾಣಿಸಿಕೊಂಡಿತ್ತು. ನಮ್ಮ ಸಿಬ್ಬಂದಿ ಪ್ರತಿಯೊಬ್ಬರ ರಕ್ತದ ಪರೀಕ್ಷೆ ಮಾಡಿದ್ದರು. ಯಾರಲ್ಲೂ ಡೆಂಗಿ ಪಾಸಿಟಿವ್ ಬಂದಿರಲಿಲ್ಲ’ ಎಂದರು.