‘ತತ್ವಪದಗಳು ಎಂದರೆ ಜೀವನದ ಮೌಲ್ಯಗಳ ದರ್ಶನ. ಅವುಗಳನ್ನು ಹಾಡುವ, ಭಜನೆ ಮಾಡುವ ಸಂಸ್ಕೃತಿ ಈಗ ಮಾಯವಾಗಿದೆ. ನಮ್ಮ ಪೂರ್ವಜರು ಹಾಡುವ ಜೊತೆಗೆ ಬದುಕಿನಲ್ಲೂ ಅಳವಡಿಸಿಕೊಂಡಿದ್ದರು’ ಎಂದರು. ಎಲ್ಲ ತತ್ವಪದಗಳನ್ನು ಒಂದೆಡೆ ಸೇರಿಸಿ ಸಂಪುಟಗಳಾಗಿ ಹೊರ ತಂದಿರುವುದು ಅದ್ಬುತವಾದ ಕೆಲಸ. 81 ಸಂಶೋಧಕರು ಇದಕ್ಕಾಗಿ ಶ್ರಮಿಸಿದ್ದಾರೆ. ಬಾಕಿ ಇರುವ ಇನ್ನೂ 28 ಸಂಪುಟಗಳನ್ನು ಹೊರ ತರುವ ಕೆಲಸವನ್ನು ತ್ವರಿತವಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ತತ್ವಪದ ಸಂಪುಟಗಳನ್ನು ಕಣಜ ವೆಬ್ಸೈಟ್ಗೂ ಅಪ್ಲೋಡ್ ಮಾಡಲಾಗುವುದು.