ಈ ನಡೆಯ ಮೂಲಕ ಕಾಂಗ್ರೆಸ್ ಜನರ ಅನುಕಂಪ ಗಿಟ್ಟಿಸುವ ಸಾಧ್ಯತೆ ಇದೆ. ಇವುಗಳ ಹಿಂದಿನ ವಾಸ್ತವ ಸ್ಥಿತಿಯನ್ನು ಬಯಲಿಗೆಳೆಯುವ ಕೆಲಸ ಮಾಡಬೇಕಿದೆ. ಈ ಯೋಜನೆಗಳಿಗೆ ಅಗತ್ಯವಿರುವ ಅನುದಾನವೆಷ್ಟು, ಎಲ್ಲಿಂದ ಮತ್ತು ಹೇಗೆ ಅದನ್ನು ಕ್ರೋಡೀಕರಿಸುತ್ತಾರೆ ಎಂಬುದನ್ನು ಪತ್ತೆ ಮಾಡಿ ಜನರಿಗೆ ತಿಳಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.