ಪಕ್ಷದಲ್ಲಿ, ಕೆಲಸ ಮಾಡುವವರೇ ಒಬ್ಬರು ಲಾಭ ಪಡೆಯುವವರೇ ಇನ್ನೊಬ್ಬರು ಎಂಬ ಸ್ಥಿತಿ ಇದೆ. ಚುನಾವಣೆಗಳಲ್ಲಿ, ಯುವಕರಿಗೆ ಟಿಕೆಟ್ ಸಿಗಬೇಕು. ಇದೇ ವೇಳೆ, ಪಕ್ಷಕ್ಕಾಗಿ 30-40 ವರ್ಷಗಳಿಂದ ದುಡಿದ ಹಿರಿಯರನ್ನೂ ಪರಿಗಣಿಸಬೇಕು ಎಂದರು. ಪಂಜಾಬ್ನಲ್ಲಿ ಕಳೆದ ಚುನಾವಣೆಯ ಉದಾಹರಣೆ ನೀಡಿದ ಅವರು, ಗೆಲ್ಲಬೇಕಾಗಿದ್ದ ಹಲವು ಕ್ಷೇತ್ರಗಳಲ್ಲಿ ನಾವು ಸೋತೆವು. ಇದಕ್ಕೆ ಅಲ್ಲಿನ ನಾಯಕರ ಆಂತರಿಕ ಕಚ್ಚಾಟ ಕಾರಣವಾಯಿತು. ಇಂತಹ ಸಂಗತಿ ಮರುಕಳಿಸಿದಂತೆ ಎಚ್ಚರ ವಹಿಸಬೇಕು ಎಂದರು.