ಬೆಂಗಳೂರು: ನಾಲ್ಕು ಮಂದಿಯನ್ನು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸದಸ್ಯರಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
ರಾಜ್ಯಪಾಲ ವಜುಭಾಯಿ ವಾಲಾ ಅವರು ನೇಮಕಕ್ಕೆ ಒಪ್ಪಿಗೆ ಕೊಟ್ಟ ನಂತರ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಕಲಬುರ್ಗಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನಾಗಾಬಾಯಿ ಬುಳ್ಳಾ, ಚನ್ನಪಟ್ಟಣದ ರಘುನಂದನ್ ರಾಮಣ್ಣ, ಮೈಸೂರಿನ ಪ್ರೊ.ಎಚ್. ಗೋವಿಂದಯ್ಯ, ಅರಣ್ಯ ಅಧಿಕಾರಿ ಮೈಕೆಲ್ ಸೈಮನ್ ಬರೆಟ್ಟೊ ಅವರನ್ನು ಕೆಪಿಎಸ್ಸಿ ಸದಸ್ಯರಾಗಿ ನೇಮಿಸಲಾಗಿದೆ.