ಕೇದಾರದಲ್ಲಿರುವ ಕೇದಾರೇಶ್ವರ, ಗುಪ್ತ ಕಾಶಿಯಲ್ಲಿನ ವಿಶ್ವನಾಥಲಿಂಗ, ಮಧುಮೇಶ್ವರದಲ್ಲಿನ ಶಿವಲಿಂಗ, ಉಕ್ತಿ ಮಠದಲ್ಲಿನ ಓಂಕಾರೇಶ್ವರಲಿಂಗಗಳನ್ನು ಇತರ ನಾಲ್ವರು ಅರ್ಚಕರು ಪೂಜಿಸುವ ಸಂಪ್ರದಾಯ ಇದೆ ಎಂದು ವಿವರ ನೀಡಿದರು.
ಪರಿಸ್ಥಿತಿ ಹೀಗಿರುವಾಗ, ಸ್ವರೂಪಾನಂದ ಸ್ವಾಮೀಜಿ ಕೇದಾರೇಶ್ವರನ ಪೂಜೆ ಮತ್ತು ರಾವಲ್ ಬಗೆಗೆ ಅನಗತ್ಯವಾಗಿ ವಿವಾದ ಹುಟ್ಟುಹಾಕುತ್ತಿದ್ದಾರೆ. ಹೀಗೆ ಮಾಡಲು ಅವರಿಗೆ ಯಾವುದೇ ಅಧಿಕಾರ ಇಲ್ಲ ಎಂದರು.
ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ವಿಜಯ ಬಹುಗುಣ ಅವರೊಂದಿಗೆ ಈಗಾಗಲೇ ಕೇದಾರಪೀಠದ ಗುರುಗಳು ಈ ಎಲ್ಲಾ ವಿಷಯಗಳನ್ನು ಚರ್ಚಿಸಿದ್ದಾರೆ ಎಂದು ತಿಳಿಸಿದರು.
ಬದ್ರಿಕಾಶ್ರಮದ ಸ್ವಾಮಿ ವಸುದೇವಾನಂದ ಸರಸ್ವತಿ ಅವರು ಜೋಷಿಮಠದ ಸ್ವರೂಪಾನಂದ ಸ್ವಾಮೀಜಿ ಅವರ ಅರ್ಥಹೀನ ಹೇಳಿಕೆ ಖಂಡಿಸಿದ್ದಾರೆ. ವೀರಶೈವ ಧರ್ಮ ಪರಂಪರೆ ಮತ್ತು ಕೇದಾರೇಶ್ವರನ ಪೂಜೆ ಮಾಡುವ ಅಧಿಕಾರ ಕೇದಾರ ರಾವಲ್ರಿಂದ ನೇಮಿಸಿದ ಅರ್ಚಕರಿಗೆ ಇದೆ.